ಶಿರಸಿ: ಜಸ್ಟೀಸ್ ಜಿ.ಎನ್.ಸಭಾಹಿತ ಹಾಗೂ ಜಸ್ಟೀಸ್ ವಿ.ಜಿ.ಸಭಾಹಿತ ಅವರ ಸ್ಮರಣೆ ಹಿನ್ನೆಲೆಯಲ್ಲಿ ಆರೋಗ್ಯಕ್ಕಾಗಿ ಆಯುರ್ವೇದ, ಸನ್ಮಾನ ಕಾರ್ಯಕ್ರಮ ನಗರದ ಹಾಲೊಂಡ ಬಡಾವಣೆಯ ಗಾಯತ್ರಿ ಗೆಳೆಯರ ಬಳಗದಲ್ಲಿ ಜ.28ರ ಸಂಜೆ 4ಕ್ಕೆ ನಡೆಯಲಿದೆ.
ವೈದ್ಯ ಕಿಶೋರ್ ಕುಮಾರ್ ರಾಜಪುರೋಹಿತ ಅವರಿಂದ ಆರೋಗ್ಯ ಸಲಹೆ ಕಾರ್ಯಕ್ರಮದ ಬಳಿಕ ಮಾರಿಕಾಂಬಾ ಪಿ.ಯು. ಕಾಲೇಜಿನ ಆದರ್ಶ ಅಧ್ಯಾಪಕ ಕೆ.ಎಚ್.ಸುಬ್ರಹ್ಮಣ್ಯ ಅವರನ್ನು ಸಾಹಿತಿಗಳಾದ ಮನೋಹರ ಮಲ್ಮನೆ, ಹನುಮಂತ ಸಾಲಿ, ಬಳಗದ ಎಂ.ಎಸ್. ಹೆಗಡೆ ಗೌರವಿಸಲಿದ್ದಾರೆ ಎಂದು ಸಂಘಟಕ ವಿ.ಜಿ.ಗಾಯತ್ರಿ ತಿಳಿಸಿದ್ದಾರೆ.